ಬೆಂಗಳೂರಿನಿಂದ ಮಯ್ಸೂರಿಗೆ ಹೋಗುವಾಗ, ಕೆಂಗೇರಿ ಆದ ಮೇಲೆ ಸಿಗುವ ಊರೇ 'ಬಿಡದಿ'. ಮಯ್ಸೂರಿನಿಂದ ಬೆಂಗಳೂರಿಗೆ ಬರುವವರು ಇಲ್ಲಿ 'ಬೀಡು' ಬಿಟ್ಟು ಪಯಣದ ದಣಿವನ್ನು ಆರಿಸಿಕೊಂಡು ಮುಂದೆ ಬೆಂಗಳೂರಿನ ಕಡೆಗೆ ಹೋಗುತ್ತಿದ್ದರು ಎಂಬ ಮಾತಿದೆ. ಹಾಗಾಗಿ ಇದಕ್ಕೆ 'ಬಿಡದಿ' ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.
ಬಿಡದಿ biḍadi lodgings provided for visitors [DED 5393]
ಆದರೆ, ಇದರ ಮೊದಲ ಹೆಸರು ಬಿಡದಿಯಾಗಿರಲಿಲ್ಲ; 'ಬಿರಡೆ'ಯಾಗಿತ್ತು. ೧೮೦೦ ರಲ್ಲಿ ಪ್ರಾನ್ಸಿಸ್ ಬುಕನನ್ ಎಂಬ ಸ್ಕಾಟಿಶ್ ಮಾಂಜುಗ ಮದರಾಸು, ಮಯ್ಸೂರು, ಮಲಬಾರ್ ಮತ್ತು ಕೆನರ ಕಡೆಗಳಲ್ಲೆಲ್ಲಾ ಸುತ್ತಾಡಿ 'A Journey from Madras through the Countries of Mysore, Canara and Malabar (1807)' ಎಂಬ ಹೊತ್ತಗೆಯನ್ನು ಬರೆದಿದ್ದಾನೆ. ಅದರಲ್ಲಿ ಹೀಗೆ ಹೇಳಲಾಗಿದೆ:-
ಅಂದರೆ ೧೮೦೦ ರಲ್ಲಿ ಬಿಡದಿಯ ಹೆಸರು ಬಿರಡಿ/ಬಿರಡೆ ಎಂದೇ ಇತ್ತು. ಆಮೇಲೆ, ಹೆಚ್ಚಾಗಿ ಪಯಣಿಗರು ಅಲ್ಲಿ ಬಂದು ಬಿಡಾರ/ಬಿಡದಿ ಹೂಡಲು ಶುರು ಮಾಡಿದ ಮೇಲೆ 'ಬಿರಡಿ' ಎಂಬುದೇ ಮೆಲ್ಲಗೆ 'ಬಿಡದಿ' ಎಂದು ಮಾರ್ಪಾಟಾಗಿರಬಹುದು.
ಬೆಂಗಳೂರಿನ ಸುತ್ತಮುತ್ತ ಮರದ ಹೆಸರಿರುವ ಊರುಗಳು ಕಾಣ ಸಿಗುತ್ತವೆ.
ಎತ್ತುಗೆಗೆ, ಹುಳಿಮಾವು, ಹಲಸೂರು, ಕಗ್ಗಲೀಪುರ
ಬಿಡದಿ biḍadi lodgings provided for visitors [DED 5393]
ಆದರೆ, ಇದರ ಮೊದಲ ಹೆಸರು ಬಿಡದಿಯಾಗಿರಲಿಲ್ಲ; 'ಬಿರಡೆ'ಯಾಗಿತ್ತು. ೧೮೦೦ ರಲ್ಲಿ ಪ್ರಾನ್ಸಿಸ್ ಬುಕನನ್ ಎಂಬ ಸ್ಕಾಟಿಶ್ ಮಾಂಜುಗ ಮದರಾಸು, ಮಯ್ಸೂರು, ಮಲಬಾರ್ ಮತ್ತು ಕೆನರ ಕಡೆಗಳಲ್ಲೆಲ್ಲಾ ಸುತ್ತಾಡಿ 'A Journey from Madras through the Countries of Mysore, Canara and Malabar (1807)' ಎಂಬ ಹೊತ್ತಗೆಯನ್ನು ಬರೆದಿದ್ದಾನೆ. ಅದರಲ್ಲಿ ಹೀಗೆ ಹೇಳಲಾಗಿದೆ:-
೧೩ ಮೇ, ೧೮೦೦: ನಾನು 'ಬಿರಡೆ'(ಬಿರಡಿ) ಎಂಬ ಊರಿಗೆ ಹೋದೆ. ಬಿರಡೆ ಎಂಬ ಮರದ ಹೆಸರಿಂದನೇ ಈ ಊರಿಗೆ 'ಬಿರಡೆ' ಎಂಬ ಹೆಸರು ಬಂದಿದೆ. ಅದನ್ನು Pterocarpus Sissoo ಎಂಬ ಗಿಡದರಿಮೆಯ ಹೆಸರಿನಿಂದ ಗುರುತಿಸಲಾಗಿದೆ.ಇದನ್ನೇ ಕನ್ನಡ ಸಾಹಿತ್ಯ ಪರಿಶತ್ತಿನ ನಿಗಂಟಿನಲ್ಲಿ ಹೀಗೆ ಕೊಡಲಾಗಿದೆ. ಬೇವು ತಾಳೆ ಮರಗಳ ಹಾಗೆ ಈ ಮರವೂ ಎತ್ತರಕ್ಕೆ ಬೆಳೆಯುವ ಮರವೆಂದು ಇದರಲ್ಲಿ ವಿವರಸಲಾಗಿದೆ.
ಅಂದರೆ ೧೮೦೦ ರಲ್ಲಿ ಬಿಡದಿಯ ಹೆಸರು ಬಿರಡಿ/ಬಿರಡೆ ಎಂದೇ ಇತ್ತು. ಆಮೇಲೆ, ಹೆಚ್ಚಾಗಿ ಪಯಣಿಗರು ಅಲ್ಲಿ ಬಂದು ಬಿಡಾರ/ಬಿಡದಿ ಹೂಡಲು ಶುರು ಮಾಡಿದ ಮೇಲೆ 'ಬಿರಡಿ' ಎಂಬುದೇ ಮೆಲ್ಲಗೆ 'ಬಿಡದಿ' ಎಂದು ಮಾರ್ಪಾಟಾಗಿರಬಹುದು.
ಬೆಂಗಳೂರಿನ ಸುತ್ತಮುತ್ತ ಮರದ ಹೆಸರಿರುವ ಊರುಗಳು ಕಾಣ ಸಿಗುತ್ತವೆ.
ಎತ್ತುಗೆಗೆ, ಹುಳಿಮಾವು, ಹಲಸೂರು, ಕಗ್ಗಲೀಪುರ
ತುಂಬ ಒಳ್ಳೆ ಮಾಹಿತಿ ಸಾರ್
ReplyDelete