ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Saturday, November 19, 2016

ಕನಕಪುರ ಅಲ್ಲ 'ಕಾನ್-ಕಾನಳ್ಳಿ'

ಬೆಂಗಳೂರಿನಿಂದ ಸುಮಾರು ೧೨ ಹರದಾರಿ (೬೦ ಕಿ.ಮೀ) ದೂರ ಇರುವ ಊರಿಗೆ ಈಗ 'ಕನಕಪುರ' ಎಂದು ಹೇಳಲಾಗುತ್ತದೆ. ಆದರೆ ಕನ್ನಡ ವಿಕಿಪಿಡಿಯಾದಲ್ಲಿ ಹೀಗೆ ಹೇಳಲಾಗಿದೆ.
1974ರ ವರೆಗೂ ಇದಕ್ಕೆ ಕಾನಕಾನಹಳ್ಳಿ ಎಂಬ ಹೆಸರಿತ್ತು.
 ಕನ್ನಡದಲ್ಲಿ 'ಕಾಣಿ' ಎಂಬ ಪದವಿದೆ. 'ಕಾಣಿ' kāṇi property, possession, hereditary right; [DED1444].

'ಕಾನ್-ಕಾನಳ್ಳಿ' ಎಂದೇ ಮಂದಿಯ ಬಾಯಲ್ಲಿ ಇರುವ ಹೆಸರು. ಕಾಣಿಕಾರನ ಹಳ್ಳಿ ಎಂಬುದು ಇದರ ಮೊದಲ ಹೆಸರೆಂದು ಕಾಣಿಕಾರ್ (ನೆಲದೊಡೆಯ) ಎಂಬುದರಿಂದ ಈ ಹೆಸರು ಬಂತೆಂದೂ ಇಲ್ಲಿಯ ಜನ ತಿಳಿದು ಕೊಂಡಿದ್ದಾರೆಂದೂ ಆದರೆ ಇದು ಸಂಸ್ಕ್ರುತದ ಕನ್ಯಾ-ಕರ್ಣ('ಭವಾನಿ'ಯ ಕಿವಿ) ಪದವಾಗಿದ್ದಿರಬಹುದೆಂದು ೧೮೦೦ ರಲ್ಲಿ ಪ್ರಾನ್ಸಿಸ್ ಬುಕನನ್ ಎಂಬ ಸ್ಕಾಟಿಶ್ ಮಾಂಜುಗ ಮದರಾಸು, ಮಯ್ಸೂರು, ಮಲಬಾರ್ ಮತ್ತು ಕೆನರ ಕಡೆಗಳಲ್ಲೆಲ್ಲಾ ಸುತ್ತಾಡಿ 'A Journey from Madras through the Countries of Mysore, Canara and Malabar (1807)' ಎಂಬ ಹೊತ್ತಗೆನ್ನು ಬರೆದು, ಅದರಲ್ಲಿ ಹೀಗೆ ಹೇಳಿದ್ದಾನೆ:-

ಕಾಣಿಕಾರನ ಹಳ್ಳಿ: ಕಾಣಿಕಾರರಿಗೋಸ್ಕರವೇ ಯಾಕೆ ಹಳ್ಳಿಯನ್ನು ಕಟ್ಟಲಾಯಿತು ಇಲ್ಲವೆ ಇಲ್ಲಿದ್ದವರೆಲ್ಲ ಕಾಣಿಕಾರರೇ? ಈ ಕೇಳ್ವಿಗಳಿಗೆ ಉತ್ತರ ದೊರೆಯುವುದು ಕಶ್ಟ. ಹೀಗೆ ಕಾಣಿಕಾರರಿಗೆ ಹಳ್ಳಿಯನ್ನು ಕಟ್ಟುವ ಪರಿಪಾಟ ಇದ್ದರೆ ಇದೇ ಹೆಸರಿನ ಊರಿನ ಹೆಸರುಗಳು ನಮಗೆ ಬೇರೆ ಕಡೆಗಳಲ್ಲಿಯೂ ಕಾಣಸಿಗಬೇಕಿತ್ತು. ಆದರೆ ಬೇರೆ ಕಡೆ ಕಾಣಸಿಗುವುದಿಲ್ಲ.

ಕನ್ಯಾ-ಕರ್ಣ ಹಳ್ಳಿ: ಹೆಚ್ಚಿನ ಮಂದಿಗೆ ತಿಳಿಯದ ಸಂಸ್ಕ್ರುತದ ಪದಗಳನ್ನು ಬಳಸಿ ಊರಿಗೆ ಹೆಸರು ಕೊಡುವುದಕ್ಕೆ ಯಾವುದೇ ತೆರಹು ಇಲ್ಲ ಯಾಕಂದರೆ ಕನ್ನಡ ನಾಡಿನ ಊರುಗಳ ಹೆಸರುಗಳೆಲ್ಲ ಹೆಚ್ಚಾಗಿ ಕನ್ನಡದ್ದೇ ಆದ ಪದಗಳನ್ನು ಬಳಸಿರುತ್ತಾರೆ.

ಇವೆರಡೂ ಬಿಡಿಸಿಕೆಗಳ ಆಚೆ ನೋಡಿದರೆ ಮಯ್ಸೂರು ಸೀಮೆಯಲ್ಲಿ (ಬೆಂಗಳೂರು ಮತ್ತು ಮಯ್ಸೂರಿನ ಸುತ್ತಮುತ್ತ) 'ಕನ್ನ' ಎಂಬ ಪದವಿರುವ ಹಲವು ಊರುಗಳ ಹೆಸರು ಸಿಗುತ್ತವೆ. ಅಲ್ಲದೆ ಕೊಲ್ಲಾಪುರ, ಊಟಿಯಲ್ಲೂ ಕೂಡ ಕಾಣಸಿಗುತ್ತವೆ.

ಕನ್ನಂಬಾಡಿ (ಕೆ.ಅರ್.ಎಸ್)
ಕನ್ನಳ್ಳಿ, ಕನ್ನಹಳ್ಳಿ(ಮಳವಳ್ಳಿ ಮತ್ತು ಬೆಂಗಳೂರ ಹತ್ತಿರ)
ಚಿಕ್ಕಕನ್ನಹಳ್ಳಿ, ದೊಡ್ಡಕನ್ನಹಳ್ಳಿ (ಬೆಂಗಳೂರಿನ ಸರ್ಜಾಪುರದ ದಾರಿಯಲ್ಲಿ)
ಕನ್ನಮಂಗಲ (ಬೆಂಗಳೂರು)
ಕನ್ನೇಗವ್ಡನ ಕೊಪ್ಪಲು(ಮಯ್ಸೂರು)
ಕನ್ನೇನಹಳ್ಳಿ (ತುಮಕೂರು)
ಕಾನೇರಿ(ಕೊಲ್ಲಾಪುರ)
ಕನ್ನೇರಿ (ಊಟಿ)

ಆದ್ದರಿಂದ 'ಕನಕಪುರ'ದ ದಿಟವಾದ ಹೆಸರು 'ಕನ್ನಹಳ್ಳಿ' ಎಂದು ಎಣಿಸಬಹುದು. ಈ ಕನ್ನಹಳ್ಳಿಯನ್ನು ಬೇರೆ ಕನ್ನಹಳ್ಳಿಗಳಿಂದ ಬೇರೆಯಾಗಿಸಲು ಬಹುಶಹ 'ಕನ್ನಕನ್ನ' ಎಂದು ಎರಡು ಸಲ ಸೇರಿಸಿ 'ಕನ್ನಕನ್ನಹಳ್ಳಿ' ಎಂದು ಹೇಳಹೊರಟಾಗ
'ಕನ್-ಕನ್ನಳ್ಳಿ' ಆಗಿ, ಅದನ್ನೇ ದಿನಬಳಕೆಯ ನೆಲೆಯಲ್ಲಿ ಬೇಗ ಹೇಳುವಾಗ ಕಾನ್-ಕಾನಳ್ಳಿ ಎಂದಾಗಿರಬೇಕು ಎಂದು ಎಣಿಸುವುದಕ್ಕೆ ಎಡೆಯಿದೆ.

ಹಾಗಾದರೆ, ಈ 'ಕನ್ನ'ರು ಯಾರು ಎಂಬುದನ್ನು ಮುಂದಿನ ಪದಗುಟ್ಟಿನಲ್ಲಿ ತಿಳಿಯೋಣ

Saturday, November 12, 2016

ಗಗನ ಚುಕ್ಕಿ ಅಲ್ಲ 'ಗಂಗನ ಚುಕ್ಕಿ'

ಮಳವಳ್ಳಿಯಿಂದ ಸತ್ತೇಗಾಲಕ್ಕೆ ಹೋಗುವಾಗ ಸಿಗುವ ಶಿವನ ಸಮುದ್ರದಲ್ಲಿ ಇರುವ ಅಬ್ಬಿಗೆ 'ಗಗನ ಚುಕ್ಕಿ' ಎಂಬ ಹೆಸರು ಈಗ ಬಳಕೆಯಲ್ಲಿದೆ. ಇಲ್ಲಿ 'ಗಗನ'(ಕನ್ನಡದ ಬಾನು) ಎಂಬುದು ಸಂಸ್ಕ್ರುತ ಪದ ಎಂಬುದಾಗಿ ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ 'ಗಗನ' ಎಂಬುದು 'ಗಂಗನ'(of Ganga) ಎಂಬುದರ ಮಾರ್ಪಾಟು ಎಂಬುದಕ್ಕೆ ದೂಸರಿದೆ.

ವಿಜಯನಗರದ ಕಾಲದಲ್ಲಿ ಆಗಿನ ಅರಸರು ಆನೆಗುಂದಿ ಅರಸುಮನೆತನಕ್ಕೆ ಸೇರಿದ 'ಗಂಗರಾಜ'ನೆಂಬುವನನ್ನು ಶಿವನಸಮುದ್ರವೆಂಬ ನಡುಗಡ್ಡೆಯನ್ನು ಆಳಲು ಕಳಿಸಿದರು. ಗಂಗರಾಜನು ಇಲ್ಲೇ ಒಂದು ಪಟ್ಟಣವನ್ನು ಕಟ್ಟಿ ಇಲ್ಲೇ ಆಳುತ್ತಿದ್ದನು. ಹಾಗಾಗಿ ಇದಕ್ಕೆ 'ಗಂಗನ ಚುಕ್ಕಿ' ಎಂಬ ಹೆಸರು ಬಂದಿತು.

೧೮೦೦ ರಲ್ಲಿ ಪ್ರಾನ್ಸಿಸ್ ಬುಕನನ್  ಎಂಬ ಸ್ಕಾಟಿಶ್ ಮಾಂಜುಗ ಮದರಾಸು, ಮಯ್ಸೂರು, ಮಲಬಾರ್ ಮತ್ತು ಕೆನರ ಕಡೆಗಳಲ್ಲೆಲ್ಲಾ ಸುತ್ತಾಡಿ 'A Journey from Madras through the Countries of Mysore, Canara and Malabar (1807)' ಎಂಬ ಹೊತ್ತಗೆಯನ್ನು ಬರೆದಿದ್ದಾನೆ. ಅದರಲ್ಲಿ ಹೀಗೆ ಹೇಳಲಾಗಿದೆ:-